ಯುವ ನಾಯಕರಾದ ಕನ್ಹಯ್ಯಾ ಕುಮಾರ್, ಶೇಹ್ಲಾ ರಶೀದ್ ಮತ್ತು ಉಮರ್ ಖಲೀದ್ ಅವರನ್ನು ಶತ್ರುಗಳಂತೆ ಕಾಣಲಾಗಿದೆ. ದೂರದೃಷ್ಟಿ ಹೊಂದಿದ್ದ ಈ ಯುವ ನಾಯಕರು ಶಾಂತಿ ಮತ್ತು ಅಹಿಂಸಾ ತತ್ವದ ಅಡಿಯಲ್ಲಿ ಹೋರಾಟ ನಡೆಸುತ್ತಿದ್ದರು. ಇವರು ರಾಜಕೀಯ ಕ್ಷೇತ್ರದ ಆಸ್ತಿ ಎಂದು ಪರಿಗಣಿಸಬೇಕಾಗಿತ್ತು. ಬಡವರ ಪರ ಯೋಜನೆಗಳನ್ನು ರೂಪಿಸಲು ಇವರಿಗೆ ಅವಕಾಶ ನೀಡಬೇಕಾಗಿತ್ತು’ ಎಂದು ಅವರು ತಿಳಿಸಿದ್ದಾರೆ.