‘ನಮ್ಮ ಪಕ್ಷವು ಜಮ್ಮು–ಕಾಶ್ಮೀರದ ಜನರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಪ್ರಾರಂಭವಾದಾಗಿನಿಂದ ವಿವಿಧ ತಿರುವುಗಳನ್ನು ಕಂಡಿದೆ. ಪಕ್ಷವು ಜಮ್ಮು–ಕಾಶ್ಮೀರ ಜನರ ಆಕಾಂಕ್ಷೆಗಳಿಗೆ ಕನ್ನಡಿ ಹಿಡಿಯಲಿದೆ. ಜಮ್ಮು–ಕಾಶ್ಮೀರ ರಾಜಕಾರಣದಿಂದ ನ್ಯಾಷನಲ್ ಕಾನ್ಫರೆನ್ಸ್ ಅನ್ನು ಅಳಿಸಿಹಾಕಲು ವಿಶ್ವದ ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ. ಜನರ ನಂಬಿಕೆ, ನಮ್ಮ ಅಸಂಖ್ಯಾತ ನಾಯಕರು, ಕಾರ್ಮಿಕರು, ಸಹವರ್ತಿಗಳು ಮತ್ತು ಪ್ರತಿನಿಧಿಗಳ ತ್ಯಾಗವೇ ನಮ್ಮನ್ನು ಮುಂದುವರಿಸಿದೆ’ ಎಂದು ಅವರು ಹೇಳಿದ್ದಾರೆ.