ಬಸ್ ನಂಬರ್ 29ಸಿ ಯಲ್ಲಿ ಸಂಚರಿಸಿದ ಅವರು, ರಾಜ್ಯ ಸರ್ಕಾರ ಮಹಿಳೆಯರಿಗೆ ಒದಗಿಸಿರುವ ಉಚಿತ ಬಸ್ ಪ್ರಯಾಣ ಸೌಲಭ್ಯದ ಬಗ್ಗೆ ಮಹಿಳಾ ಪ್ರಯಾಣಿಕರೊಬ್ಬರ ಬಳಿ ವಿಚಾರಿಸಿದರು. ನಂತರ ವಿಧಾನಸಭೆಗೆ ತೆರಳಿ, ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಸರ್ಕಾರಿ ಶಾಲೆಗಳ 1ರಿಂದ 5ನೇ ತರಗತಿ ಮಕ್ಕಳಿಗೆ ಬೆಳಿಗ್ಗೆಯ ತಿಂಡಿ ನೀಡುವುದಾಗಿ ಘೋಷಿಸಿದರು.ಜನರ ಆರೋಗ್ಯ ಅಗತ್ಯಗಳಿಗಾಗಿ ನಗರಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವುದಾಗಿ ತಿಳಿಸಿದರು. ಇದೇ ವೇಳೆ, ಒಂದು ವರ್ಷದಲ್ಲಿ ಡಿಎಂಕೆ ಸರ್ಕಾರ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳು ಮತ್ತು ಸಾಧನೆಯನ್ನು ಸ್ಮರಿಸಿದರು.