ನ್ಯಾಯಾಲಯದಲ್ಲಿ, ತಮಿಳುನಾಡು ಸರ್ಕಾರವು ಈ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. ಈ ಯೋಜನೆ 1977ರಿಂದ ಜಾರಿಯಲ್ಲಿದೆ. ಪಳನಿಯಲ್ಲಿರುವ ಮುರುಗನ್ ದೇವಸ್ಥಾನ, ಮಧುರೆಯ ಮೀನಾಕ್ಷಿ ಅಮ್ಮನ್ ದೇವಸ್ಥಾನ, ತಿರುಚೆಂಡೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭಕ್ತರು ಉಡುಗೊರೆಯಾಗಿ ಚಿನ್ನವನ್ನು ನೀಡುತ್ತಿದ್ದರು. ಸಮಯಪುರದ ಮರಿಯಮ್ಮನ ದೇವಸ್ಥಾನದಲ್ಲಿನ ಸಣ್ಣ ಆಭರಣಗಳನ್ನು ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಲಾಗಿದೆ. 500 ಕೆ.ಜಿಗಿಂತಲೂ ಹೆಚ್ಚು ಚಿನ್ನದ ಗಟ್ಟಿಗಳನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆ ಎಂದು ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದೆ.