‘ಒಡಿಶಾದಲ್ಲಿ ಹಮ್ಮಿಕೊಳ್ಳಲಾಗಿರುವ ಯಾತ್ರೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆಯ ದಿನ (ಅ.31) ಚಾಲನೆ ನೀಡಲಾಗಿದೆ. ರಾಜ್ಯದ 24 ಜಿಲ್ಲೆಗಳಲ್ಲಿ ಈ ಯಾತ್ರೆ ಸಂಚರಿಸಲಿದ್ದು ಒಟ್ಟು 2,250 ಕಿ.ಮೀ. ಕ್ರಮಿಸಲಿದೆ. ಭುವನೇಶ್ವರದಲ್ಲೇ ಇದು ಕೊನೆಗೊಳ್ಳಲಿದೆ. ಅಸ್ಸಾಂನಲ್ಲಿ ನಿಗದಿಯಾಗಿರುವ ಯಾತ್ರೆಯು (830 ಕಿ.ಮೀ) ಗೋಲೊಕ್ಗಂಜ್ನಲ್ಲಿ ಆರಂಭವಾಗಲಿದೆ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಜೈರಾಮ್ ರಮೇಶ್ ಹೇಳಿದ್ದಾರೆ.