ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ: 1,400 ಮನೆಗಳ ತೆರವು, ಏಳು ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತರು

‘ನಾವು ಅತಿಕ್ರಮಣಕಾರಾಗಿದ್ದರೆ ಸರ್ಕಾರ ಏಕೆ ಶಾಶ್ವತ ಸೌಲಭ್ಯ ಕಲ್ಪಿಸಿತು?’
Last Updated 27 ಸೆಪ್ಟೆಂಬರ್ 2021, 12:33 IST
ಅಕ್ಷರ ಗಾತ್ರ

ಧೋಲ್ಪುರ (ಅಸ್ಸಾಂ): ಸರ್ವಾನಂದ ಸೋನೊವಾಲ್‌ ನೇತೃತ್ವದ ಬಿಜೆಪಿ ಸರ್ಕಾರ ಸೇರಿದಂತೆ ಅಸ್ಸಾಂ ಸರ್ಕಾರಗಳು ದರಂಗ್‌ ಜಿಲ್ಲೆಯ ಸಿಪಜ್ಹರ್‌ ಗ್ರಾಮದ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದವು. ಈಗ ಅದೇ ಜನರ ವಿರುದ್ಧ ಸರ್ಕಾರ, ಒತ್ತುವರಿ ಜಮೀನು ತೆರವು ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಧೋಲ್ಪುರ I, II ಮತ್ತುIII ನೇ ವರ್ಗಗಳ ಗ್ರಾಮಗಳ ಸ್ಥಳಾಂತರಗೊಂಡಿರುವ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಮೂಲಕ ಅವರ ನೆಲೆಯನ್ನು ನ್ಯಾಯಸಮ್ಮತಗೊಳಿಸಲಾಯಿತು. ಈಗ ಅದೇ ಜನರನ್ನು ಅತಿಕ್ರಮಣಕಾರರು ಎಂದು ಹೇಳಲಾಗುತ್ತಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಪುತ್ರಾ ನದಿ ತೀರದಮೂರು ಗ್ರಾಮಗಳಿಗೆ ಪಿಟಿಐ ವರದಿಗಾರರು ಭೇಟಿ ನೀಡಿದ ವೇಳೆ ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಮಿಷನ್‌’ ಅಡಿಯಲ್ಲಿ ತಮ್ಮ ಗ್ರಾಮಗಳಲ್ಲಿ ನಿರ್ಮಿಸಲಾದ ಶೌಚಾಲಯಗಳನ್ನು ಗ್ರಾಮಸ್ಥರು ವರದಿಗಾರರಿಗೆ ತೋರಿಸಿದರು.

‘ಇಲ್ಲಿನ ಜನರಿಗೆ ಶಾಶ್ವತ ವಿಳಾಸದೊಂದಿಗೆ ಆಧಾರ್‌ ಕಾರ್ಡ್‌ ಪೂರೈಸುವ ನಿಟ್ಟಿನಲ್ಲಿ ಸರ್ಕಾರವು ಐದು ಆಧಾರ್‌ ಕೇಂದ್ರಗಳನ್ನು ನಿರ್ಮಿಸಿವೆ. ಆದರೆ ಸರ್ಕಾರಕ್ಕೆ ಇದೇ ನಾಗರಿಕರು ಈಗ ಅತಿಕ್ರಮಣಕಾರಿಗಳು ಆಗಿದ್ದಾರೆ’ ಎಂದು ಸ್ಥಳೀಯರು ತಿಳಿಸಿದರು.

ಆದರೆ ದರಂಗ್‌ ಜಿಲ್ಲಾಡಳಿತ, ಇದು ಹಿಂದಿನ ಸರ್ಕಾರ ಸ್ಥಾಪಿಸಿದ ಕೇಂದ್ರಗಳಾಗಿವೆ, ಅವುಗಳನ್ನು ನಿಯಮಗಳಿಗನುಸಾರ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ.

‘ಕಳೆದ ಎರಡು ವಾರಗಳಲ್ಲಿ ಸುಮಾರು 1,200-1,400 ಮನೆಗಳನ್ನು ತೆರವುಗೊಳಿಸಲಾಗಿದೆ. ಇದರಿಂದಾಗಿ 7,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ’ ಎಂದು ವಿವಿಧ ಮೂಲಗಳು ಹೇಳಿವೆ.

‘1983ರ ಬಳಿಕ ನಮ್ಮನ್ನು ಸಂಕಷ್ಟಗೊಳಗಾದ ಪೀಡಿತ ಜನರು ಎಂದು ಗುರುತಿಸಿದ ಸರ್ಕಾರವು ಅಸ್ಸಾಂನ ವಿವಿಧ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಿತು. ಬಳಿಕ, ನಮಗೆ ವಿದ್ಯುತ್‌ ಸಂಪರ್ಕವನ್ನೂ ಕಲ್ಪಿಸಿತು’ ಎಂದು ಸಫರ್‌ ಆಲಿ ಎಂಬವರು ವರದಿಗಾರರಿಗೆ ಮಾಹಿತಿ ನೀಡಿದರು.

‘‍ಇಲ್ಲಿ ಸರ್ಕಾರವು ಪ್ರಧಾನ ಮಂತ್ರಿ ಗ್ರಾಮೀಣ ಅವಾಜ್‌ ಯೋಜನೆಯಡಿ(ಪಿಎಂಜಿಎವೈ) ಹಲವು ಮನೆಗಳನ್ನು ನಿರ್ಮಿಸಿತು. ನಮ್ಮ ಮನೆಗಳಿಗೆ ಸೌರಶಕ್ತಿ, ಶೌಚಾಲಯ ಸೌಲಭ್ಯ ಕಲ್ಪಿಸತು. ಈ ಬೆಳವಣಿಗಳೆಲ್ಲವೂ ಬಿಜೆಪಿ ಸರ್ಕಾರದಡಿಯೇ ನಡೆದಿದ್ದವು. ಆದರೂ, ಈಗ ಇಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಅವರು ದೂರಿದರು.

‘ಒಂದು ವೇಳೆ ನಾವು ಇಲ್ಲಿ ಅಕ್ರಮವಾಗಿ ವಾಸವಾಗಿದ್ದರೇ ಸರ್ಕಾರ ಈ ಸೌಲಭ್ಯಗಳನ್ನು ಏಕೆ ನೀಡಿತು’ ಎಂದು ಅವರು ಪ್ರಶ್ನಿಸಿದರು.

‘ಒತ್ತುವರಿ ಪ್ರದೇಶದಲ್ಲಿ ಮೂರು ಆರೋಗ್ಯ ಕೇಂದ್ರಗಳು, 38 ಕಿರಿಯ ಪ್ರಾಥಮಿಕ ಶಾಲೆಗಳು, ಎರಡು ಎಂಇ ಶಾಲೆಗಳು, 42 ಅಂಗನವಾಡಿ ಕೇಂದ್ರಗಳು ಮತ್ತು 13 ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸರ್ಕಾರಿ ಸೌಲಭ್ಯಗಳು ಇವೆ’ ಎಂದು ಧೋಲ್ಪುರದ ನಿವಾಸಿ ಫೈಜುರ್ ರೆಹಮಾನ್ ಹೇಳಿದರು.

‘ನಾಲ್ಕು ಮಸೀದಿಗಳು, ಎರಡು ಮದರಸಾಗಳು, ಒಂದು ಸಾರ್ವಜನಿಕ ಸ್ಮಶಾನ ಮತ್ತು 10 ಕ್ಕೂ ಹೆಚ್ಚು ವೈಯಕ್ತಿಕ ಸ್ಮಶಾನಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ನಮ್ಮ ಧಾರ್ಮಿಕ ನಂಬಿಕೆಯನ್ನು ಸರ್ಕಾರ ಏಕೆ ಪದೇ ಪದೇ ಗುರಿಯಾಗಿಸುತ್ತಿದೆ?’ ಎಂದು ಸಫರ್‌ ಆಲಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT