'ಇದೇನು ಅನಿರೀಕ್ಷಿತವಲ್ಲ. ಸುನಿಲ್ ಜಾಖರ್ ಇಂದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ನಿರ್ಲಜ್ಜ ಹಿಂದುತ್ವ ರಾಜಕಾರಣ ಮಾಡುವ ಮೂಲಕ ತುಂಬಾ ಹಿಂದೆಯೇ ಆ ಪಕ್ಷಕ್ಕಾಗಿ ಕೆಲಸ ಆರಂಭಿಸಿದ್ದರು. ನಮ್ಮ ಪಕ್ಷಕ್ಕೆ ಪ್ರತಿಯೊಂದು ರೀತಿಯಲ್ಲಿಯೂ ಹಾನಿ ಮಾಡಿದ್ದರು. ಅವರು 'ಹಿಂದೂ' ಅಸ್ತ್ರ ಬಳಸಿಕೊಳ್ಳಲು ಕಾರಣವಿತ್ತು. ಆ ಕಾರಣ ಇಂದು ಬಹಿರಂಗವಾಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ,ಜಾಖರ್ ತಮಗೆ ಸರಿಹೊಂದುವ ಪಕ್ಷವನ್ನು ಸೇರಿದ್ದಾರೆ ಎಂದು ಕುಟುಕಿರುವ ಅವರು, ಅಭಿನಂದನೆಯನ್ನೂ ಹೇಳಿದ್ದಾರೆ.