ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರ ಏಕ ಸದಸ್ಯ ಪೀಠವು, ಮೇಲ್ಮನವಿದಾರ ವಕೀಲರ ವಿರುದ್ಧ ಹೊರಡಿಸಿದ ಜಾಮೀನು ರಹಿತ ವಾರೆಂಟ್ ನೀಡಲು ಹೋದ ಪೊಲೀಸರಿಗೂ ಕರ್ತವ್ಯಕ್ಕೆ ನೂರಾರು ವಕೀಲರೊಂದಿಗೆ ಅಡ್ಡಿಪಡಿಸಿ, ನೋಟಿಸ್ ನೀಡದಂತೆ ತಡೆದಿದ್ದಾರೆ. ಇದನ್ನು ಸಾಬೀತುಪಡಿಸುವ ಸಿಸಿ ಟಿ.ವಿ ದೃಶ್ಯಗಳೂ ಇವೆ.ಮೇಲ್ಮನವಿದಾರರು ‘ಸಂಪೂರ್ಣ ಸರಿಪಡಿಸಲಾಗದ ವಕೀಲರ ವರ್ಗಕ್ಕೆ ಸೇರಿದವರು ಮತ್ತು ಅವರು ವಕೀಲ ವೃತ್ತಿಗೆ ಕಳಂಕ. ನ್ಯಾಯಾಂಗದಲ್ಲಿ ಅವರಿಗೆ ಯಾವುದೇ ಗೌರವವಿಲ್ಲ. ಅವರ ವಿರುದ್ಧದ ಶಿಕ್ಷೆಯನ್ನು ಅಸಮಂಜಸವೆಂದು ಪರಿಗಣಿಸಲಾಗದು’ ಎಂದು ಪೀಠ ಕಟುವಾಗಿ ಹೇಳಿತು.