ರಸ್ತೆ ತಡೆ ಮಾಡುತ್ತಿರುವುದರಿಂದ ದೆಹಲಿ ಮತ್ತು ನೋಯ್ಡಾ ನಡುವೆ ಸಂಚಾರ ಮಾಡುವುದು ಪ್ರಯಾಸದಾಯಕವಾಗಿದೆ ಎಂದು ನೋಯ್ಡಾ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿ ಹರಿಯಾಣ ಸರ್ಕಾರ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್
ಕೌಲ್ ಮತ್ತು ಎಂ. ಎಂ. ಸುಂದ್ರೇಶ್ ಅವರಿದ್ದ ಪೀಠ ಈ ಕುರಿತು ರೈತ ನಾಯಕರ ಪ್ರತಿಕ್ರಿಯೆಯನ್ನು ಕೇಳಿದೆ.