ಸುರ್ಜೇವಾಲಾ ಅವರು ಕೇಂದ್ರ ಸರ್ಕಾರ ನ. 14ರಂದು ಹೊರಡಿಸಿದ್ದ ಕೇಂದ್ರೀಯ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಸುಗ್ರೀವಾಜ್ಞೆ ಮತ್ತು ಇ.ಡಿ, ಸಿಬಿಐ ಮುಖ್ಯಸ್ಥರು ಮತ್ತು ರಕ್ಷಣೆ, ಗೃಹ ಹಾಗೂ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ಅವಧಿಯನ್ನೂ ವಿಸ್ತರಿಸುವ ಕುರಿತು ಸಿಬ್ಬಂದಿ ಸಚಿವಾಲಯ ನ.15ರಂದು ಹೊರಡಿಸಿದ್ದ ಅಧಿಸೂಚನೆ ವಿರುದ್ಧವೂ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.