ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಯುವ ಕೆಲ ಸಮಯಕ್ಕೂ ಮೊದಲು ಮಾದಕವಸ್ತು ಮಾರಾಟಗಾರನನ್ನು ಭೇಟಿಯಾಗಿದ್ದ ಸುಶಾಂತ್’

Last Updated 9 ಅಕ್ಟೋಬರ್ 2020, 7:21 IST
ಅಕ್ಷರ ಗಾತ್ರ

ನವದೆಹಲಿ:ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಆದರೆ ಇದೇ ಹೊತ್ತಿನಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯಯನ್‌ ಸ್ವಾಮಿ ಅವರು ನೀಡಿರುವ ಹೇಳಿಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸುಶಾಂತ್‌ ಅವರು ಸಾಯುವ ಕೆಲವೇ ಗಂಟೆಗಳ ಮೊದಲು ದುಬೈ ಮೂಲದ ಮಾದಕವಸ್ತು ಮಾರಾಟಗಾರನನ್ನು ಭೇಟಿಯಾಗಿದ್ದರು ಎಂದು ಹಿರಿಯ ರಾಜಕಾರಣಿ ಸ್ವಾಮಿ ಟ್ವೀಟ್‌ ಮಾಡಿದ್ದಾರೆ.

ಅವರು, ‘ಸುನಂದಾ ಪುಷ್ಕರ್‌ ಪ್ರಕರಣದಲ್ಲಿ ಏಮ್ಸ್‌ ವೈದ್ಯರು ನಡೆಸಿದ ಮರಣೋತ್ತರ ಪರೀಕ್ಷೆ ವೇಳೆ ಆಕೆಯ ಹೊಟ್ಟೆಯಲ್ಲಿ ನಿಜಾಂಶ ಪತ್ತೆಯಾಗಿತ್ತು. ಶ್ರೀದೇವಿ ಅಥವಾ ಸುಶಾಂತ್‌ವಿಚಾರದಲ್ಲಿ ಹೀಗೆ ಮಾಡಿಲ್ಲ. ಸುಶಾಂತ್‌ ಪ್ರಕರಣದಲ್ಲಿ, ದುಬೈನ ಮಾದಕವಸ್ತು ಮಾರಾಟಗಾರ ಅಯಾಶ್‌ ಖಾನ್‌ ಎಂಬಾತ ಸುಶಾಂತ್‌ ಕೊಲೆಯಾದ ದಿನ ಅವರನ್ನು (ಸುಶಾಂತ್‌ರನ್ನು) ಭೇಟಿ ಮಾಡಿದ್ದ. ಏಕೆ?’ ಎಂದು ಪ್ರಶ್ನಿಸಿದ್ದಾರೆ.

ತನಿಖೆ ಕುರಿತು, ‘ರಿಯಾ ಚಕ್ರವರ್ತಿ ಅವರು ಮಹೇಶ್‌ ಭಟ್‌ ಅವರೊಂದಿಗೆ ನಡೆಸಿದ ಸಂಭಾಷಣೆಗೆ ವಿರುದ್ಧವಾದ ಸಾಕ್ಷ್ಯಗಳನ್ನು ನೀಡಿದರೆ, ಸತ್ಯವನ್ನು ತಿಳಿಯಲು ಸಿಬಿಐ ಆಕೆಯನ್ನು ಬಂಧಿಸಿ ಕಸ್ಟಡಿ ವಿಚಾರಣೆಗೆ ಒಳಪಡಿಸುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ’ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಸಿಬಿಐ ಸುಶಾಂತ್ ಜೊತೆ ವಾಸವಿದ್ದ ಸಿದ್ದಾರ್ಥ್‌ ಪಿಥಾನಿ, ಅಡುಗೆ ಕೆಲಸದ ನೀರಜ್ ಸಿಂಗ್ ಮತ್ತು ಸಹಾಯಕ ದೀಪೇಶ್ ಸಾವಂತ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ರಿಯಾ ಚಕ್ರವರ್ತಿಯನ್ನು ಇನ್ನೂ ಉನ್ನತ ತನಿಖೆಗೆ ಒಳಪಡಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT