‘ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರಿಂದ ನಮಗೆ ಹಲವು ಕರೆಗಳು ಬರುತ್ತಿವೆ. ತಮ್ಮ ಮಕ್ಕಳನ್ನು ಈ ಕೂಡಲೇ ಅಲ್ಲಿಂದ ಕರೆತರುವಂತೆ ಅವರು ಕೋರಿದ್ದಾರೆ. ಆದರೆ, ಉಕ್ರೇನ್ನ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿವೆ. ಮಕ್ಕಳನ್ನು ಭಾರತಕ್ಕೆ ವಾಪಸ್ ಕರೆತರಲು ಅವರಿಗೆ ನಮ್ಮ ನೆರವು ಬೇಕಾಗಿದೆ. ಉಕ್ರೇನ್ನ ವಿವಿಧ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆತರಲು ವಂದೇ ಭಾರತ್ ಮಿಷನ್ನಂತಹ ವಿಶೇಷ ವಿಮಾನಗಳನ್ನು ಆರಂಭಿಸುವಂತೆ ಅವರು ಮನವಿ ಮಾಡಿದ್ದಾರೆ.