ಧ್ಯಾನಸ್ಥ ರೂಪದಲ್ಲಿರುವ ಪ್ರತಿಮೆಯು ಉದಯ್ಪುರದಿಂದ 45 ಕಿಲೋಮೀಟರ್ ದೂರದಲ್ಲಿದ್ದು, ತತ್ ಪದಮ್ ಸಂಸ್ಥಾನ ಇದನ್ನು ನಿರ್ಮಿಸಿದೆ. ಈ ಪ್ರತಿಮೆಯು 20 ಕಿ.ಮೀ ದೂರದವರೆಗೆ ಗೋಚರಿಸುತ್ತದೆ. ಇದರ ನಿರ್ಮಾಣಕ್ಕೆ ಮೂರು ಸಾವಿರ ಟನ್ ಉಕ್ಕು ಮತ್ತು ಕಬ್ಬಿಣ,2.5 ಲಕ್ಷ ಕ್ಯೂಬಿಕ್ ಟನ್ ಕಾಂಕ್ರಿಟ್ ಮತ್ತು ಮರಳು ಬಳಕೆಯಾಗಿದೆ. ಈ ಯೋಜನೆಗೆ 2012 ಆಗಸ್ಟ್ನಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು.