ಪ್ರಕಾಶ್ ಅವರು ಸ್ಕೂಟರ್ನಿಂದ ಬ್ಯಾಟರಿ ತೆಗೆದು, ರಾತ್ರಿ 12.30ರ ಸುಮಾರಿಗೆ ಚಾರ್ಚ್ಗೆ ಹಾಕಿದ್ದರು. ಬ್ಯಾಟರಿ ಮುಂಜಾನೆ 4 ಗಂಟೆ ವೇಳೆ ಸ್ಫೋಟಗೊಂಡಿದೆ. ಈ ವೇಳೆ ಮನೆಯ ಹಜಾರದಲ್ಲೇ ಮಲಗಿದ್ದ ಪ್ರಕಾಶ್ ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಅವರಿಗೆ ಗಂಭೀರ ಗಾಯಗಳಾಗಿವೆ. ಬೆಂಕಿ ನಂದಿಸುವ ಸಂದರ್ಭದಲ್ಲಿ ಪ್ರಕಾಶ್ ಮತ್ತು ಅವರ ಹೆಂಡತಿ ಕೃಷ್ಣವೇಣಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.