ಸಭೆಯಲ್ಲಿ ಉಭಯ ನಾಯಕರು, ಕರ್ನಾಟಕ, ತೆಲಂಗಾಣ ರಾಜಕೀಯ ಮತ್ತು ರಾಷ್ಟ್ರಮಟ್ಟದ ರಾಜಕಾರಣದ ಕುರಿತು ಚರ್ಚಿಸುವರು. ಈ ಹಿಂದೆ ನಡೆದಿದ್ದ ಮಾತುಕತೆಯಂತೆ ವಿಜಯ ದಶಮಿ ವೇಳೆಗೆ ರಾಷ್ಟ್ರಮಟ್ಟದಲ್ಲಿ ಪರ್ಯಾಯ ರಾಜಕೀಯ ಶಕ್ತಿ ಹುಟ್ಟು ಹಾಕುವ ಕುರಿತು ಮಹತ್ವದ ಮಾತುಕತೆ ನಡೆಯಲಿದೆ ಎಂದು ಜೆಡಿಎಸ್ ಮೂಲ ಗಳು ತಿಳಿಸಿವೆ.