ವಿದ್ಯುತ್ ಕಂಬವನ್ನು ಸುಲಭವಾಗಿ ಏರುವ ಸಾಮರ್ಥ್ಯವಿಲ್ಲ ಎನ್ನುವ ಕಾರಣವನ್ನು ನೀಡಿ ಇಬ್ಬರು ಮಹಿಳಾ ಅಭ್ಯರ್ಥಿಗಳಿಗೆ ಲೈನ್ಮ್ಯಾನ್ ಉದ್ಯೋಗವನ್ನು ಕಂಪನಿ ನಿರಾಕರಿಸಿತ್ತು. ವಿ.ಭಾರತಿ ಹಾಗೂ ಬಿ.ಶಿರೀಶ ಎಂಬುವವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್, ನ್ಯಾಯಮೂರ್ತಿ ಬಿ.ವಿಜಯ್ಸೇನ್ ರೆಡ್ಡಿ ಅವರಿದ್ದ ವಿಭಾಗೀಯ ಪೀಠವು, ‘ಮಹಿಳೆಯನ್ನು ಸೇನೆಗೇ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಉಲ್ಲೇಖಿಸಿತು.