ವಿಶಾಲ್ ಮೃತಪಟ್ಟ ಯೋಧ. ‘ಶ್ರೀನಗರದ ಜನನಿಬಿಡ ಪ್ರದೇಶವಾದ ಲಾಲ್ ಚೌಕ್ನ ಮೈಸುಮಾ ಪ್ರದೇಶದ ದಾರ್ ಕಟ್ಟಡದ ಬಳಿ ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಇಬ್ಬರು ಯೋಧರು ತೀವ್ರ ಗಾಯಗೊಂಡರು. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟರು. ಗಾಯಗೊಂಡ ಮತ್ತೊಬ್ಬ ಯೋಧ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.