ಸೇಲಂನಲ್ಲಿರುವ ಬುದ್ಧ ಟ್ರಸ್ಟ್, ತಲೈವಟ್ಟಿ ಮುನಿಯಪ್ಪನ್ ದೇಗುಲದ ವಿಗ್ರಹದ ಹಿನ್ನೆಲೆ ಬಗ್ಗೆ ಪರಿಶೀಲನೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ (ಎಎಸ್ಐ) ಸೂಚನೆ ನೀಡಬೇಕು ಎಂದು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಬಳಿಕ ವಿಗ್ರಹ ಪರಿಶೀಲನೆಗೆ ರಾಜ್ಯ ಪುರಾತತ್ವ ಇಲಾಖೆ ಆಯುಕ್ತರಿಗೆ ಕೋರ್ಟ್ ಸೂಚಿಸಿತ್ತು. ಇದು ದೇಗುಲದ ಮೂರ್ತಿ ಬುದ್ಧ ಅವರದ್ದಾಗಿದೆ ಎಂದು ವರದಿ ನೀಡಿತ್ತು.