ಮುಂಬೈ: ಶಿವಸೇನೆ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿಉದ್ಧವ್ ಠಾಕ್ರೆ ಅವರುಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಲ್ಲಿನ ಶಿವೈ ಪಾರ್ಕ್ನಲ್ಲಿ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಲ ರಾಮಣ ವಿಶೇಷವಾಗಿ ಬಂದಿದ್ದಾನೆ, ಅವನನ್ನು ಸುಡದೇ ಬಿಡುವುದಿಲ್ಲ ಎಂದುಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಟೀಕಿಸಿದ್ದಾರೆ.
ದೇಶ ದ್ರೋಹಿಗಳು ಒಟ್ಟಿಗೆ ಸೇರಿದ್ದಾರೆ, ಅವರಿಗೆ ಕೊನೆಗೆ ಏನಾಗುತ್ತದೆ? ಎಂಬುದು ಎಲ್ಲರಿಗೂ ಗೊತ್ತಿದೆ.ಪ್ರತಿ ವರ್ಷದಂತೆ, ಈ ಬಾರಿಯೂ ರಾವಣನನ್ನು ಸುಡಲಾಗುವುದು. ಆದರೆ ಈ ಬಾರಿ ರಾವಣ ವಿಭಿನ್ನವಾಗಿದ್ದಾನೆ ಎಂದು ಠಾಕ್ರೆ ಹೇಳಿದರು.
ಮತ್ತೊಂದು ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಉದ್ದವ್ ಠಾಕ್ರೆ ಅವರನ್ನು ಟೀಕಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.