ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಸಲ ರಾವಣ ವಿಭಿನ್ನವಾಗಿದ್ದಾನೆ: ಸಿಎಂ ಶಿಂಧೆ ಟೀಕಿಸಿದ ಠಾಕ್ರೆ 

Last Updated 5 ಅಕ್ಟೋಬರ್ 2022, 16:18 IST
ಅಕ್ಷರ ಗಾತ್ರ

ಮುಂಬೈ: ಶಿವಸೇನೆ ವರಿಷ್ಠ ಹಾಗೂ ಮಾಜಿ ಮುಖ್ಯಮಂತ್ರಿಉದ್ಧವ್ ಠಾಕ್ರೆ ಅವರುಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲ್ಲಿನ ಶಿವೈ ಪಾರ್ಕ್‌ನಲ್ಲಿ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಲ ರಾಮಣ ವಿಶೇಷವಾಗಿ ಬಂದಿದ್ದಾನೆ, ಅವನನ್ನು ಸುಡದೇ ಬಿಡುವುದಿಲ್ಲ ಎಂದುಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣವನ್ನು ಟೀಕಿಸಿದ್ದಾರೆ.

ದೇಶ ದ್ರೋಹಿಗಳು ಒಟ್ಟಿಗೆ ಸೇರಿದ್ದಾರೆ, ಅವರಿಗೆ ಕೊನೆಗೆ ಏನಾಗುತ್ತದೆ? ಎಂಬುದು ಎಲ್ಲರಿಗೂ ಗೊತ್ತಿದೆ.ಪ್ರತಿ ವರ್ಷದಂತೆ, ಈ ಬಾರಿಯೂ ರಾವಣನನ್ನು ಸುಡಲಾಗುವುದು. ಆದರೆ ಈ ಬಾರಿ ರಾವಣ ವಿಭಿನ್ನವಾಗಿದ್ದಾನೆ ಎಂದು ಠಾಕ್ರೆ ಹೇಳಿದರು.

ಮತ್ತೊಂದು ಕಾರ್ಯಕ್ರಮದಲ್ಲಿಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಉದ್ದವ್‌ ಠಾಕ್ರೆ ಅವರನ್ನು ಟೀಕಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT