ಅವರು (ವಿಪಕ್ಷಗಳು) ಗಲಭೆಯಿಂದ ರಾಜಕೀಯ ಪ್ರಚಾರ ಪಡೆಯುತ್ತಾರೆ. ಹಾಗಾಗಿ ಅವರು ಹೊಸ ಪಿತೂರಿಗಳಲ್ಲಿ ತೊಡಗುತ್ತಾರೆ. ಈ ಎಲ್ಲಾ ಪಿತೂರಿಗಳ ವಿರುದ್ಧ ನಾವು ಜಾಗರೂಕರಾಗಿರಬೇಕು ಮತ್ತು ಅಭಿವೃದ್ಧಿಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದಿದ್ದಾರೆ ಯೋಗಿ.
ಏತನ್ಮಧ್ಯೆ, ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಆನ್ನೈನ್ ಸಂವಾದದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಇತರ ರಾಜಕೀಯ ಪಕ್ಷಗಳು ಸುಳ್ಳು ಮತ್ತು ಮೋಸದಿಂದ ಜನರಹಾದಿ ತಪ್ಪಿಸಲು ಪಿತೂರಿಗಳನ್ನು ನಡೆಸುತ್ತಿದೆ. ಅವರುಯಾವ ರೀತಿ ಆಡಳಿತ ನಡೆಸಿದರು ಮತ್ತು ಸಾರ್ವಜನಿಕ ಆಸ್ತಿಯನ್ನು ಯಾವ ರೀತಿ ಕಬಳಿಸಿದರು ಎಂಬುದನ್ನು ಇಲ್ಲಿನ ಜನರು ನೋಡಿದ್ದಾರೆ. ರಾಜ್ಯದಲ್ಲಿ ಮುಂಬರುವ ಉಪಚುನಾವಣೆಗಳಿಗೆ ಸಜ್ಜಾಗಲು ಈ ಪಿತೂರಿಗಳನ್ನು ನಡೆಸುತ್ತಿರುವವರ ವಿಶ್ವಾಸವನ್ನು ಕೆಡವಬೇಕೆಂದು ಹೇಳಿದ್ದಾರೆ.