ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಗರ: ಮೂವರು ಎಲ್‌ಇಟಿ ಉಗ್ರರ ಹತ್ಯೆ

Last Updated 16 ಮಾರ್ಚ್ 2022, 11:32 IST
ಅಕ್ಷರ ಗಾತ್ರ

ಶ್ರೀನಗರ: ಇಲ್ಲಿನ ಹೊರವಲಯದ ನೌಗಾಮ್‌ ಪ್ರದೇಶದಲ್ಲಿ ಬುಧವಾರ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಲಷ್ಕರ್‌–ಎ–ತೈಬಾದ (ಎಲ್‌ಇಟಿ) ಮೂವರು ಹತರಾಗಿದ್ದಾರೆ.

‘ಹತ್ಯೆಯಾದವರನ್ನು ಶೋಪಿಯಾನ್‌ನ ಆದಿಲ್ ತೇಲಿ, ಸಾಕಿಬ್ ತಂತ್ರಾಯ್ ಎಂದು ಗುರುತಿಸಲಾಗಿದ್ದು, ಹತ್ಯೆಯಾದ ಮೂರನೇ ವ್ಯಕ್ತಿ ಉಮರ್‌ ತೇಲಿ ಎಂದು ತಿಳಿದು ಬಂದಿದ್ದು, ಆತನ ಗುರುತು ಪತ್ತೆಗಾಗಿ ಕುಟುಂಬ ಸದಸ್ಯರನ್ನು ಕರೆದಿದ್ದೇವೆ’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ತಿಳಿಸಿದರು.

‘ಹತ್ಯೆಯಾದ ಎಲ್‌ಇಟಿಯ ಈ ಮೂವರು ಉಗ್ರರು ಸ್ಥಳೀಯರಾಗಿದ್ದು, ಮಾರ್ಚ್‌ 9ರಂದು ಶ್ರೀನಗರದ ಖೋನ್‌ಮೋಹ್‌ ಪ್ರದೇಶದಲ್ಲಿ ನಡೆದಿದ್ದ ಪಿಡಿಪಿ ಸರಪಂಚ ಸಮೀರ್‌ ಅಹ್ಮದ್‌ ಭಟ್‌ ಅವರ ಹತ್ಯೆಯಲ್ಲಿ ಈ ಮೂವರು ಭಾಗಿಯಾಗಿದ್ದರು. ಹತ್ಯೆಯಾದವರಿಂದ ಒಂದು ಎಕೆ-47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT