ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಚಿತ ವರ್ತನೆ: ಮೂವರು ರಾಜ್ಯಸಭೆ ಸದಸ್ಯರ ಅಮಾನತು

ಸಂಸತ್‌ ಸಂಕೀರ್ಣದ ಗಾಂಧಿ ಪ್ರತಿಮೆ ಎದುರು ಮುಂದುವರಿದ ಧರಣಿ
Last Updated 28 ಜುಲೈ 2022, 14:15 IST
ಅಕ್ಷರ ಗಾತ್ರ

ನವದೆಹಲಿ: ವಿರೋಧ ಪಕ್ಷಗಳ ಸದಸ್ಯರ ಅಮಾನತು ಸರಣಿ ಮುಂದುವರಿದಿದ್ದು, ರಾಜ್ಯಸಭೆಯಲ್ಲಿ ಗುರುವಾರ ಅನುಚಿತ ವರ್ತನೆ ತೋರಿದರೆಂದು ಇಬ್ಬರು ಎಎಪಿಯ ಸದಸ್ಯರು ಮತ್ತು ಒಬ್ಬರು ಪಕ್ಷೇತರ ಸದಸ್ಯ ಸೇರಿ ಮೂವರು ಸಂಸದರನ್ನು ಉಪಸಭಾಪತಿ ಕಲಾಪದಿಂದ ಅಮಾನತುಗೊಳಿಸಿದ್ದಾರೆ.

ಸಂಸತ್‌ನ ಎರಡೂ ಸದನಗಳಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.

ಸಭಾಪತಿ ಪೀಠದ ಎದುರು ಧಾವಿಸಿ ಘೋಷಣಾ ಫಲಕ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಕಾರಣಕ್ಕೆಎಎಪಿಯ ಸುಶಿಲ್‌ ಕುಮಾರ್‌ ಗುಪ್ತಾ, ಸಂದೀಪ್‌ ಕುಮಾರ್‌ ಪಾಠಕ್‌ ಹಾಗೂ ಅಜಿತ್‌ ಕುಮಾರ್‌ ಭುಯನ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಸಂಸದೀಯ ವ್ಯವಹಾರಗಳ ಸಚಿವ ವಿ.ಮುರಳೀಧರನ್‌ ಅವರು ಈ ವಾರದ ಉಳಿದ ಅವಧಿಯ ಕಲಾಪದಿಂದ ಮೂವರು ಸದಸ್ಯರನ್ನು ಅಮಾನತುಗೊಳಿಸುವ ನಿಲುವಳಿ ಸೂಚನೆ ಮಂಡಿಸಿದರು. ಇದನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು. ಉಪಸಭಾಪತಿ ಹರಿವಂಶ್‌ ಅವರು ಅಮಾನತುಗೊಳಿಸಲಾದ ಸದಸ್ಯರ ಹೆಸರು ಪ್ರಕಟಿಸಿದರು.

ವಿರೋಧ ಪಕ್ಷಗಳ ಕೆಲವು ಸದಸ್ಯರು ಮತ ವಿಭಜನೆಗಾಗಿ ಒತ್ತಾಯಿಸಿದಾಗ, ಉಪಸಭಾಪತಿ ಅವರು ಮತ ವಿಭಜನೆಗೆ ಅವಕಾಶ ನೀಡುವಂತೆ ಸದಸ್ಯರಿಗೆ ಸೂಚಿಸಿದರು. ಆದರೆ, ವಿರೋಧ ಪಕ್ಷದ ಸದಸ್ಯರು ಗದ್ದಲ ಮುಂದುವರಿಸಿದರು. ಇದರಿಂದ ಸದನವನ್ನು ಮಧ್ಯಾಹ್ನ 2ರವರೆಗೆ ಮುಂದೂಡಲಾಯಿತು.

ಅನುಚಿತ ವರ್ತನೆ ತೋರಿದ ಕಾರಣಕ್ಕೆ ಈವರೆಗೆ ರಾಜ್ಯಸಭೆಯ ಕಲಾಪದಿಂದ ವಿರೋಧ ಪಕ್ಷಗಳ 23 ಸದಸ್ಯರನ್ನು ಅಮಾನತುಪಡಿಸಿದಂತಾಗಿದೆ.

ಸೊಳ್ಳೆ, ಸೆಕೆಗೆ ಅಂಜದೆ ಅಹೋರಾತ್ರಿ ಪ್ರತಿಭಟನೆ: ಸೊಳ್ಳೆಗಳ ಕಡಿತ ಮತ್ತು ಸೆಕೆಗೆ ಅಂಜದೆ ಐವರು ಅಮಾನತುಗೊಂಡ ಐವರು ಸಂಸದರು ಪ್ರತಿಭಟನಾರ್ಥವಾಗಿ ಸಂಸತ್‌ ಸಂಕೀರ್ಣದಲ್ಲಿನ ಗಾಂಧಿ ಪ್ರತಿಮೆ ಎದುರು ಇಡೀ ರಾತ್ರಿ ಕಳೆದರು.

ಸಿಎಂಐನ ಸಂತೋಷ್‌ಕುಮಾರ್‌, ಎಎಪಿಯ ಸಂಜಯ್‌ ಸಿಂಗ್‌ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಟಿಎಂಸಿಯ ಡೋಲಾ ಸೆನ್‌, ಸಂತನು ಸೆನ್‌ ಅವರುಮಧ್ಯರಾತ್ರಿವರೆಗೂ ಸ್ಥಳದಲ್ಲಿದ್ದರು.

ಟೆಂಟ್‌ ಹಾಕಲು ಅನುಮತಿ ಸಿಗದಿದ್ದರಿಂದ ಐವರು ಸಂಸದರೂ ಆಕಾಶಕ್ಕೆ ಮುಖಮಾಡಿ ಮಲಗಿ, ರಾಜ್ಯಸಭೆಯ 20 ಮತ್ತು ಲೋಕಸಭೆಯ ನಾಲ್ವರು ಸದಸ್ಯರ ಅಮಾನತು ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

‘ವಿರೋಧ ಪಕ್ಷಗಳ ಸಂಸದರು ಕೈಗೊಂಡಿರುವ 50 ತಾಸುಗಳ ನಿರಂತರ ಧರಣಿಯಲ್ಲಿ 21 ತಾಸು ಕಳೆದಿದೆ. ಇನ್ನೂ 29 ತಾಸುಗಳ ಧರಣಿ ಇದೆ. 24 ಸಂಸದರ ಅಮಾನತು ರದ್ದುಪಡಿಸುವ ಕುರಿತು ಚರ್ಚಿಸಲಾಗಿದೆ’ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಿಯಾನ್‌ ಟ್ವೀಟ್‌ ಮಾಡಿದ್ದಾರೆ.

ಪ್ರತಿಭಟನಾನಿರತಸಂಸದರಿಗೆ ಚಹಾ ತಂದ ಟಿಎಂಸಿ ಸಂಸದ ಮೌಸಮ್ ನೂರ್, ‘ಪ್ರತಿಪಕ್ಷಗಳ ಸದಸ್ಯರು ಕ್ಷಮೆಯಾಚಿಸುವುದಿಲ್ಲ ಮತ್ತು ಪ್ರತಿಭಟನೆ ಮುಂದುವರಿಯಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT