ವಾರಣಾಸಿಯಲ್ಲಿ ನಡೆದ ಬಿಜೆಪಿಯ ಬೂತ್ ಮಟ್ಟದ ವಿಜಯ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, 'ನಾನು ಯಾರೊಬ್ಬರನ್ನೂ ವೈಯಕ್ತಿಕವಾಗಿ ಟೀಕಿಸಲು ಬಯಸುವುದಿಲ್ಲ. ಆದರೆ, ಕಾಶಿಯಲ್ಲಿದ್ದಾಗಲೇ ನನಗೆ ಸಾವು ಬರಲಿ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿರುವುದರಿಂದ, ನನಗೆ ನಿಜವಾಗಿಯೂ ಬಹಳ ಸಂತೋಷವಾಗಿದೆ. ನನ್ನ ಹೃದಯ ತುಂಬಾಶಾಂತವಾದಂತೆ ಭಾಸವಾಗುತ್ತಿದೆ. ಕಾಶಿಯ ಜನರು ನನಗೆ ಎಷ್ಟು ಪ್ರೀತಿ ನೀಡಿದ್ದಾರೆ ಎಂಬುದನ್ನು ನನ್ನ ವಿರೋಧಿಗಳೂ ತಿಳಿದಿದ್ದಾರೆ. ಈ ಜನರು ನನ್ನ ಬಯಕೆಗಳನ್ನು ಪರಿಪೂರ್ಣಗೊಳಿಸಿದ್ದಾರೆ. ಕಾಶಿ ಅಥವಾ ಕಾಶಿಯ ಜನರು ನನ್ನನ್ನು ಕೊನೆಯವರೆಗೂ ಕೈಬಿಡುವುದಿಲ್ಲ ಎಂಬುದುಇದರರ್ಥ' ಎಂದು ಹೇಳಿದ್ದಾರೆ.