ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಮೈದಾನ ಅತಿಕ್ರಮಣ ಯತ್ನ: ಟಿಎಂಸಿ ಶಾಸಕರಿಂದ ಮುಂಗೈ ಕತ್ತರಿಸುವ ಬೆದರಿಕೆ

Last Updated 17 ಅಕ್ಟೋಬರ್ 2021, 6:06 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟದ ಮೈದಾನವನ್ನು ಅತಿಕ್ರಮಣ ಮಾಡಲು ಯತ್ನಿಸಿದವರಿಗೆ ಮುಂಗೈ ಕತ್ತರಿಸುವುದಾಗಿ ತೃಣಮೂಲ ಕಾಂಗ್ರೆಸ್‌ ಪಕ್ಷದ ಶಾಸಕರೊಬ್ಬರು ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕಮರ್‌ಹಟಿ ಕ್ಷೇತ್ರದ ಶಾಸಕ ಮದನ್‌ ಮಿತ್ರಾ ಹೀಗೆ ಬೆದರಿಕೆ ಹಾಕಿದ್ದು, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ‘ಮಾಜಿ ಕ್ರೀಡಾ ಸಚಿವರೂ ಆದ ಮಿತ್ರಾ, ಕೆಲವರು ಆಟದ ಮೈದಾನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಮೈದಾನವನ್ನು ನಾನು, ಸಂಸದ ಸೇರಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೆವು’ ಎಂದು ತಿಳಿಸಿದರು.

‘ನನ್ನನ್ನು ಖರೀದಿಸಬಹುದು ಎಂದು ಅವರು ಭಾವಿಸಿದ್ದರೆ ತಪ್ಪು. ಇದು, ಅವರಿಗೆ ನನ್ನ ಕಡೆಯ ಎಚ್ಚರಿಕೆ. ನನ್ನತ್ತ ಒಂದು ಬೆರಳು ತೋರಿಸಿದರೂ, ಅವರ ಮುಂಗೈಯನ್ನೇ ಕತ್ತರಿಸುತ್ತೇನೆ. ಅಗತ್ಯಬಿದ್ದರೆ ಈ ಕುರಿತು ಮುಖ್ಯಮಂತ್ರಿ ಅವರಿಗೂ ದೂರು ನೀಡುತ್ತೇನೆ’ ಎಂದು ಮಿತ್ರಾ ಅವರು ಫೇಸ್‌ಬುಕ್‌ ಲೈವ್ ಕಾರ್ಯಕ್ರಮದಲ್ಲಿ ಹೇಳಿದರು.

‘ಅತಿಕ್ರಮಣ ಯತ್ನ ಕುರಿತಂತೆ ಮೂವರ ಬಗ್ಗೆ ಶಂಕೆ ಇದೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಪೊಲೀಸರು ಯಾವುದೇ ಕ್ರಮ ಜರುಗಿಸದೇ ಇದ್ದರೆ, ಜನರೊಂದಿಗೆ ಸೇರಿ ಹೋರಾಟ ನಡೆಸುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT