ನಿರ್ಣಯದ ಮೇಲೆ ಚರ್ಚೆ ಆರಂಭವಾದಾಗ, ಬಿಜೆಪಿ ಶಾಸಕರು ಸಭೆಯಿಂದ ಹೊರ ನಡೆದರು. ಎಐಡಿಎಂಕೆ ಶಾಸಕಾಂಗ ಪಕ್ಷದ ಉಪ ನಾಯಕ ಒ. ಪನ್ನೀರಸೆಲ್ವಂ, ‘ಮುಖ್ಯಮಂತ್ರಿಯವರು ನೂತನ ಕೃಷಿ ಕಾಯ್ದೆಗಳಿಂದ ಏನು ಅನಾನುಕೂಲಗಳಿವೆ ಎಂದು ಪಟ್ಟಿ ಮಾಡಿದ್ದಾರೆ. ಅದೇ ರೀತಿ, ಅನುಕೂಲಗಳನ್ನು ಪಟ್ಟಿ ಮಾಡಿ ಸದನಕ್ಕೆ ತಿಳಿಸಬೇಕು‘ ಎಂದರು.