ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಾತನಾಡಿ, ಈ ಯೋಜನೆಯನ್ನು ಆರಂಭದಿಂದಲೂ ಬೆಂಬಲಿಸುತ್ತಿದ್ದ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಇದ್ದಕ್ಕಿದ್ದಂತೆ ತಮ್ಮ ನಿಲುವು ಬದಲಾಯಿಸಿದರು ಮತ್ತು ಅದರ ವಿರುದ್ಧ ನ್ಯಾಯಾಲಯಕ್ಕೆ ಹೋದರು. ರಾಜಕೀಯ ಅಡೆತಡೆಗಳು ಇಲ್ಲದಿದ್ದರೆ, ಸುಮಾರು 10 ವರ್ಷದ ಹಿಂದೆ ಯೋಜನೆ ಪ್ರಾರಂಭವಾದ ನಂತರ ಸಾಕಷ್ಟು ಪ್ರಯೋಜನಗಳು ಇರುತ್ತಿದ್ದವು ಎಂದರು.