ಗುರುವಾರ, ತಮಿಳುನಾಡು ಪಶ್ಚಿಮ ವಲಯದ ಐಜಿ ಆರ್ ಸುಧಾಕರ್ ನೇತೃತ್ವದ ಅಧಿಕಾರಿಗಳ ತಂಡವು ಚೆನ್ನೈನ ಶಶಿಕಲಾ ಅವರ ನಿವಾಸದಲ್ಲಿ ವಿಚಾರಣೆ ನಡೆಸಿತು. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಶಿಕಲಾ ಭರವಸೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.‘ಬಂಗಲೆಗೆ ಕೊನೆಯಾದಾಗಿ ಯಾವಾಗ ಭೇಟಿ ನೀಡಲಾಗಿತ್ತು, ಅಲ್ಲಿ ಇಟ್ಟಿದ್ದ ದಾಖಲೆಗಳು ಮತ್ತು ನಗದು, ಅಪಘಾತದಲ್ಲಿ ಮೃತಪಟ್ಟಚಾಲಕ ಕನಕರಾಜ್ ಅವರನ್ನು ಭೇಟಿ ಮಾಡಿದ್ದರ ಬಗ್ಗೆ ಶಶಿಕಲಾ ಅವರನ್ನು ಪ್ರಶ್ನಿಸಲಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.