‘ಸೋಮವಾರದಿಂದ ಶುಕ್ರವಾರದವರೆಗೆ ಬೆಳಗಿನ ತಿಂಡಿಯನ್ನು ಬಿಸಿ ಬಿಸಿಯಾಗಿ ನೀಡಲು ಸರ್ಕಾರ ಉದ್ದೇಶಿಸಿದೆ. ಪ್ರತಿ ದಿನವೂ ಬೇರೆ ಬೇರೆ ತಿಂಡಿಗಳನ್ನು, ಅಂದರೆ, ಉಪ್ಪಿಟ್ಟು, ಕಿಚಡಿ, ಪೊಂಗಲ್ ನೀಡಲಾಗುವುದು. ಶೂಕ್ರವಾರದಂದು ರವಾ ಕೇಸರಿಬಾತ್ ಅಥವಾ ಶಾವಿಗೆ ಕೇಸರಿಬಾತ್ ನೀಡಲು ಯೋಜಿಸಲಾಗಿದೆ. ಇದಕ್ಕಾಗಿ ಸರ್ಕಾರವು ಒಟ್ಟು ₹33.56 ಕೋಟಿ ಮೀಸಲಿರಿಸಿದೆ’ ಎಂದು ಸರ್ಕಾರದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.