ನ್ಯಾಯಮೂರ್ತಿಗಳಾದ ಎ.ಎಸ್.ಗಡ್ಕರಿ ಮತ್ತು ಪಿ.ಡಿ.ನಾಯ್ಕ್ ಅವರಿದ್ದ ವಿಭಾಗೀಯ ಪೀಠದ ಎದುರು ಹಾಜರಾದ ಸಿಬಿಐ ಪರ ವಕೀಲ ಸಂದೇಶ ಪಾಟೀಲ್ ಅವರು, ‘ಪುಣೆಯ ವಿಚಾರಣಾ ನ್ಯಾಯಾಲಯವು ಈವರೆಗೆ 15 ಸಾಕ್ಷಿಗಳ ವಿಚಾರಣೆ ನಡೆಸಿದೆ. ಇನ್ನು ಕೇವಲ ಏಳು ಅಥವಾ 8 ಸಾಕ್ಷಿಗಳ ವಿಚಾರಣೆ ಬಾಕಿ ಇದೆ. ಎರಡು ಅಥವಾ ಮೂರು ತಿಂಗಳಲ್ಲಿ ಮುಕ್ತಾಯವಾಗಲಿದೆ’ ಎಂದು ತಿಳಿಸಿದರು.