ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌: ವಿದ್ಯಾರ್ಥಿಗಳ ವಿಮಾನದ ಪ್ರಯಾಣ ವೆಚ್ಚ ಪೂರೈಕೆ: ತ್ರಿಪುರಾ ಸಿಎಂ

Last Updated 4 ಮಾರ್ಚ್ 2022, 14:12 IST
ಅಕ್ಷರ ಗಾತ್ರ

ಅಗರ್ತಲಾ (ಪಿಟಿಐ): ಯುದ್ಧಪೀಡಿತ ಉಕ್ರೇನ್‌ನಿಂದ ರಾಜ್ಯಕ್ಕೆ ಹಿಂತಿರುಗುವ ವಿದ್ಯಾರ್ಥಿಗಳ ಅಗರ್ತಲಾ–ದೆಹಲಿ ವಿಮಾನ ಪ್ರಯಾಣ ದರವನ್ನು ತಮ್ಮ ವೇತನದಿಂದ ಭರಿಸಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್‌ ಕುಮಾರ್‌ ದೇವ್‌ ಶುಕ್ರವಾರ ಹೇಳಿದ್ದಾರೆ.

‘ತ್ರಿಪುರಾ ಜನರ ಪ್ರೀತಿ ಮತ್ತು ಆದರಗಳಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ನನ್ನ ಕೃತಜ್ಞತೆಯ ಸಂಕೇತವಾಗಿ ಉಕ್ರೇನ್‌ನಿಂದ ರಾಜ್ಯಕ್ಕೆ ಹಿಂತಿರುಗುತ್ತಿರುವ ವಿದ್ಯಾರ್ಥಿಗಳ ದೆಹಲಿ–ಅಗರ್ತಲಾ ವಿಮಾನಯಾನ ದರವನ್ನು ನನ್ನ ವೇತನದ ಮೊತ್ತದಿಂದ ಭರಿಸಲು ನಿರ್ಧರಿಸಿದ್ದೇನೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT