ಅಗರ್ತಲಾ (ಪಿಟಿಐ): ಯುದ್ಧಪೀಡಿತ ಉಕ್ರೇನ್ನಿಂದ ರಾಜ್ಯಕ್ಕೆ ಹಿಂತಿರುಗುವ ವಿದ್ಯಾರ್ಥಿಗಳ ಅಗರ್ತಲಾ–ದೆಹಲಿ ವಿಮಾನ ಪ್ರಯಾಣ ದರವನ್ನು ತಮ್ಮ ವೇತನದಿಂದ ಭರಿಸಲಾಗುವುದು ಎಂದು ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ಶುಕ್ರವಾರ ಹೇಳಿದ್ದಾರೆ.
‘ತ್ರಿಪುರಾ ಜನರ ಪ್ರೀತಿ ಮತ್ತು ಆದರಗಳಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ನನ್ನ ಕೃತಜ್ಞತೆಯ ಸಂಕೇತವಾಗಿ ಉಕ್ರೇನ್ನಿಂದ ರಾಜ್ಯಕ್ಕೆ ಹಿಂತಿರುಗುತ್ತಿರುವ ವಿದ್ಯಾರ್ಥಿಗಳ ದೆಹಲಿ–ಅಗರ್ತಲಾ ವಿಮಾನಯಾನ ದರವನ್ನು ನನ್ನ ವೇತನದ ಮೊತ್ತದಿಂದ ಭರಿಸಲು ನಿರ್ಧರಿಸಿದ್ದೇನೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ.