ಪೊಲೀಸ್ ಕಸ್ಟಡಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೇ ವೇಳೆ ದಾಸ್ಗುಪ್ತಾ ತಮ್ಮ ಜಾಮೀನು ಅರ್ಜಿ ಸಲ್ಲಿಸಿದರು. ‘ದಾಸ್ಗುಪ್ತಾ ಅವರ ಮೇಲೆ ನಿರ್ದೇಶಕರ ಮಂಡಳಿ, ಶಿಸ್ತು ಸಮಿತಿಯಿದ್ದು, ಇವರು ರೇಟಿಂಗ್ ವ್ಯವಸ್ಥೆಯನ್ನು ತಿರುಚಿರಲು ಸಾಧ್ಯವಿಲ್ಲ’ ಎಂದು ಅವರ ಪರ ವಕೀಲ ಕಮಲೇಶ್ ಘುಮ್ರೆ ಹೇಳಿದರು. ಜ.1ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.