ನವದೆಹಲಿ: ಕೇಂದ್ರ ಸರ್ಕಾರವು ‘ರೈತ ವಿರೋಧಿ’ ಎಂದು ಆರೋಪಿಸಿರುವ ಟಿಆರ್ಎಸ್, ಚಳಿಗಾಲದ ಅಧಿವೇಶನದ ಉಳಿದ ಭಾಗಗಳಲ್ಲಿ ಸಂಸತ್ತಿನ ಉಭಯ ಸದನಗಳನ್ನು ಬಹಿಷ್ಕರಿಸುವುದಾಗಿ ಮಂಗಳವಾರ ಘೋಷಿಸಿದೆ.
ರೈತರನ್ನು ಬೆಂಬಲಿಸಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸಂಸದರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಲೋಕಸಭೆ ಮತ್ತು ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿದರು. ಎಲ್ಲಾ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು.
ಟಿಆರ್ಎಸ್ ಮುಖಂಡ ಕೇಶವ ರಾವ್ ಅವರು, ರೈತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಸರ್ಕಾರವು ಆಸಕ್ತಿ ತೋರುತ್ತಿಲ್ಲ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ತೆಲಂಗಾಣದಿಂದ ಭಾರತೀಯ ಆಹಾರ ನಿಗಮದಿಂದ ಭತ್ತವನ್ನು ಖರೀದಿಸುವ ವಿಷಯವನ್ನು ಲೋಕಸಭೆಯ ಪಕ್ಷದ ನಾಯಕ ನಾಮಾ ನಾಗೇಶ್ವರ್ ರಾವ್ ಪ್ರಸ್ತಾಪಿಸಿ, ಕನಿಷ್ಠ ಬೆಂಬಲ ಬೆಲೆಗೆ ಮಸೂದೆ ತರಬೇಕು ಎಂದು ಒತ್ತಾಯಿಸಿದರು.