'ಆರೋಗ್ಯವಂತ ಯುವಕರು ಕೋವಿಡ್ನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುವ ಅಥವಾ ಸಾಯುವ ಸಾಧ್ಯತೆ ಇಲ್ಲ. ಆದರೆ, ಲಸಿಕೆಗಳಿಂದಾಗಿ ಅವರು ಸಾಯುವ ಸಾಧ್ಯತೆ ಹೆಚ್ಚಿದೆ. ಲಸಿಕೆಗಳನ್ನು ಪರೀಕ್ಷಿಸದಿರುವುದು ಮತ್ತು ಗಂಭೀರ ಪ್ರತಿಕೂಲ ಪರಿಣಾಮಗಳು ಇರುವುದರ ಹೊರತಾಗಿಯೂ, ಭಿನ್ನ ದೃಷ್ಟಿಕೋನಗಳನ್ನು ತಡೆಯುವ ಪ್ರಯತ್ನಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ,' ಎಂದು ಭೂಷಣ್ ಟ್ವೀಟ್ ಮಾಡಿದ್ದರು. ಮತ್ತೊಂದು ಟ್ವೀಟ್ನಲ್ಲಿ, ತಾವು ಲಸಿಕೆ ಸುರಕ್ಷತೆ ಬಗ್ಗೆ ಸಂದೇಹ ಹೊಂದಿರುವುದು ಏಕೆ ವಿವರಿಸುವ ದಾಖಲೆಗಳನ್ನು ಹಂಚಿಕೊಂಡಿದ್ದರು.