ದೇವಾಲಯದ ‘ಸಿಂಹ ದ್ವಾರ’ದ ಬಳಿ ಬಾಗಿಲು ತೆರೆಯುವ ಮುನ್ನವೇ ದೊಡ್ಡ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ದ್ವಾರ ತೆರೆಯುತ್ತಿದ್ದಂತೆಯೇ ದೇವರ ಮೊದಲ ಆರತಿ ‘ಮಂಗಲ ಆರತಿ’ಯನ್ನು ವೀಕ್ಷಿಸಲು ಭಕ್ತರು ಮುಗಿಬಿದ್ದ ಕಾರಣ, ಇಬ್ಬರು ಭಕ್ತರು ಗಾಯಗೊಂಡು ಸ್ಥಳದಲ್ಲೇ ಬಿದ್ದರು. ಹಿಂದಿನ ದಿನ ಮಕರ ಸಂಕ್ರಾಂತಿ ಇದ್ದ ಕಾರಣ, ಮರುದಿನ ದೇವಾಲಯದ ಬಾಗಿಲು ತೆರೆಯುವುದು ಕೆಲಕಾಲ ವಿಳಂಬವಾಯಿತು ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.