2011ರಲ್ಲಿ ನಕ್ಸಲಿಸಂ ಸೇರಿದ ಉಸೆಂಡಿ, 2020ರ ಪೊಯಾರ್ಕೋಟಿ ಅರಣ್ಯ ವಲಯದಲ್ಲಿ ನಡೆಸಿದ ಸ್ಫೋಟದಲ್ಲಿ ವಿಕಾಸ್ ಜೊತೆ ಕೈಜೋಡಿಸಿದ್ದರು. 2019ರಲ್ಲಿ ಗ್ರಾಮಸ್ಥನ ಹತ್ಯೆ ಸೇರಿ ಹಲವು ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾರೆ. ಮಾವೋವಾದಿ ಗುಂಪಿನ ಹಿರಿಯರಿಂದ ಮಹಿಳೆಯರ ಶೋಷಣೆ, ಮೂಲಭೂತ ಸೌಕರ್ಯ ನೀಡುವಾಗ ಹಿರಿಯ ಮತ್ತು ಕಿರಿಯ ನಕ್ಸಲರೆಂಬ ತಾರತಮ್ಯ, ಅರಣ್ಯದಲ್ಲಿ ಕಠಿಣ ಜೀವನ, ಕಾಡುಪ್ರಾಣಿಗಳ ಭಯ ಇವೇ ಮುಂತಾದ ಕಾರಣಗಳಿಂದಾಗಿ ಮಹಾರಾಷ್ಟ್ರದ ಶರಣಾಗತಿ ನಿಯಮಕ್ಕೆ ಬದ್ಧರಾಗಿ ಶರಣಾಗಿರುವುದಾಗಿ ನಕ್ಸಲರು ಹೇಳಿದ್ದಾರೆ.