ವಾರ್ಷಿಕ ದಸರಾ ರ್ಯಾಲಿ ನಡೆಸಲು ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಯನ್ನು ಸ್ಥಳೀಯಾಡಳಿತ ಸ್ವೀಕರಿಸಿಲ್ಲ. ಅನುಮತಿ ತಡೆಹಿಡಿದಿದೆ ಎಂದುಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಶನಿವಾರ ಹೇಳಿದ್ದರು.
ಇದೇ ವರ್ಷದ ಜೂನ್ನಲ್ಲಿಶಿವಸೇನಾ ವಿಭಜನೆಯಾದ ನಂತರ ನಡೆಯುತ್ತಿರುವ ಮೊದಲ ದಸರಾ ರ್ಯಾಲಿ ಇದು. ಸೇನಾದಶಾಸಕರ ಒಂದು ಗುಂಪಿನ ಬಂಡಾಯದಿಂದಾಗಿ ಠಾಕ್ರೆ ನೇತೃತ್ವದ ಸರ್ಕಾರ ಪತನಗೊಂಡಿತ್ತು.
ಶಿವಾಜಿ ಉದ್ಯಾನದಲ್ಲಿ ದಶಕಗಳ ಹಿಂದೆಸೇನಾ ಇಂತಹ ರಾಜಕೀಯ ಸಮಾವೇಶವನ್ನು ದಸರಾ ವೇಳೆ ನಡೆಸಿತ್ತು. ಸೇನಾದ ಸಂಸ್ಥಾಪಕ ಬಾಳ ಸಾಹೇಬ್ ಠಾಕ್ರೆ ಅವರ ಹರಿತ ಭಾಷಣಕ್ಕೆ ಸಮಾವೇಶ ಸಾಕ್ಷಿಯಾಗಿತ್ತು. ಈಗ ಅಂತಹದೇ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಠಾಕ್ರೆ ನೇತೃತ್ವದ ಸರ್ಕಾರ ಪತನಗೊಂಡ ನಂತರ ಬಿಜೆಪಿ ಜತೆಗೆ ಶಿವ ಸೇನಾ ಬಂಡಾಯ ನಾಯಕ ಏಕಾಂತ್ ಸಿಂಧೆ ಸರ್ಕಾರ ರಚಿಸಿದ್ದಾರೆ. ಸದ್ಯ ಸ್ಥಳೀಯಾಡಳಿತವನ್ನು ಆಡಳಿತಾಧಿಕಾರಿ ನಡೆಸುತ್ತಿದ್ದಾರೆ.