ಉಕ್ರೇನ್ ವಾಯುಪ್ರದೇಶ ಸಂಪೂರ್ಣವಾಗಿ ಮುಚ್ಚಿರುವುದರಿಂದ ಭಾರತವು ಫೆಬ್ರುವರಿ 24ರಿಂದ ಉಕ್ರೇನ್ ನೆರೆ ದೇಶಗಳಾದ ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ ಮತ್ತು ಪೊಲೆಂಡ್ನಿಂದ ನಾಗರಿಕರನ್ನು ಸ್ಥಳಾಂತರಿಸುತ್ತಿದೆ.
'ಆಪರೇಷನ್ ಗಂಗಾ' ಭಾಗವಾಗಿ ಇಲ್ಲಿಯವರೆಗೆ 2,056 ಭಾರತೀಯರನ್ನು ಕರೆ ತರಲು ವಾಯುಪಡೆಯು 10 ವಿಮಾನಗಳ ಹಾರಾಟ ನಡೆಸಿದ್ದು, 26 ಟನ್ ಪರಿಹಾರ ಸಾಮಾಗ್ರಿಗಳನ್ನು ಹೊತ್ತೊಯ್ದಿದೆ.
ಭಾರತೀಯ ವಾಯುಪಡೆಯು ಈ ಮಹತ್ವದ ಕಾರ್ಯಾಚರಣೆಗೆ ಸಿ-17 ವಿಮಾನಗಳನ್ನು ಬಳಕೆ ಮಾಡುತ್ತಿವೆ.