‘ಪೊಲೀಸರ ಅನುಚಿತ ವರ್ತನೆಯ ಬಗ್ಗೆ ಚರ್ಚೆಗಳಾಗಿವೆ. ಗಡಿ ಭಾಗದಲ್ಲಿ ಜನಸಂದಣಿ ಇತ್ತು. ಆದರೆ ಅಂಥ ಪರಿಸ್ಥಿತಿಯಲ್ಲಿ ನಾವು ಶಿಸ್ತು ಕಾಪಾಡಿಕೊಳ್ಳುವ, ಸಾಲಿನಲ್ಲಿ ನಿಲ್ಲುವ ಮನಸ್ಥಿತಿಯಲ್ಲಿರುವುದಿಲ್ಲ. ಗಡಿ ದಾಟುವ ಧಾವಂತದಲ್ಲಿ ಭಾರತೀಯ ವಿದ್ಯಾರ್ಥಿಗಳು ವಯಸ್ಸಾದವರನ್ನು ತಳ್ಳಿದರು. ಹೀಗಾಗಿ ಪೊಲೀಸರು ಅವರೊಂದಿಗೆ ಅನುಚಿತವಾಗಿ ವರ್ತಿಸಿದರು. ಎಲ್ಲಿ ನಮ್ಮ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆಯಂಥ ಘಟನೆಗಳು ನಡೆದವೋ ಅವುಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದೇವೆ. ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಹಾಕುವುದರಿಂದ ದೂರ ಉಳಿದಿದ್ದಕ್ಕೆ ಅಂಥ ಘಟನೆಗಳು ನಡೆದಿಲ್ಲ’ ಎಂದು ಅವರು ವಿವರಿಸಿದರು.