ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಶೇಷ ವರದಿಗಾರ ಮಿಚೇಲ್ ಫಕ್ರಿ ಅವರು, ‘ಯಾವುದೇ ಕಾನೂನುಗಳು ಬಂದರೂ ಅದರಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗಬಾರದು. ಭಾರತದಲ್ಲಿ ಜಾರಿಗೊಳಿಸಿದ್ದ ಮೂರು ಕೃಷಿ ಕಾಯ್ದೆಗಳು ಭಾರತದ ಆಹಾರ ಭದ್ರತೆಗೆ ತೊಂದರೆಯುಂಟು ಮಾಡುವಂತದ್ದಾಗಿತ್ತು. ಈಗ ಆ ಕಾಯ್ದೆಗಳನ್ನು ರದ್ದುಗೊಳಿಸುವ ಕ್ರಮ ಮುತ್ಸದ್ದಿತನದ ನಡೆ’ ಎಂದು ಹೇಳಿದ್ದಾರೆ.