ಜೈಸಲ್ಮೇರ್: ಇಲ್ಲಿನ ಪೋಖರಣ್ನಲ್ಲಿರುವ ಫೈರಿಂಗ್ ರೇಂಜ್ ಪ್ರದೇಶದಲ್ಲಿರುವ ಗುಜರಿಯಲ್ಲಿದ್ದ ಗುಂಡು ಸಿಡಿದ ಪರಿಣಾಮ 23 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.
ಗಂಗಾನಗರ ಜಿಲ್ಲೆಯ ರಾಯ್ಸಿಂಗ್ ನಗರದ ನಿವಾಸಿ ರವೀಂದ್ರ ಮೃತ ದುರ್ದೈವಿ.
ಫೈರಿಂಗ್ ಪ್ರದೇಶದಲ್ಲಿ ಹಾಕಲಾಗಿದ್ದ ಗುಜರಿಯನ್ನು ಸಂಗ್ರಹಿಸುತ್ತಿದ್ದ ಸಮಯದಲ್ಲಿ ಗುಂಡು ಸಿಡಿದಿದೆ.
ಇತರ ವಸ್ತುಗಳಿಂದ ಲೋಹಗಳನ್ನು ಪ್ರತ್ಯೇಕಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.