‘ನನ್ನ ಮಗ ಆಕಾಶ್ ಕಿಶೋರ್, ಸ್ನೇಹಿತರೊಂದಿಗೆ ಸೇರಿ ಮದ್ಯ ಸೇವಿಸುವ ಅಭ್ಯಾಸ ರೂಢಿಸಿಕೊಂಡಿದ್ದ. ಈ ಕೆಟ್ಟ ಚಟದಿಂದ ಆತನನ್ನು ಬಿಡಿಸಬೇಕೆಂದು ಮದ್ಯವರ್ಜನ ಕೇಂದ್ರಕ್ಕೂ ದಾಖಲಿಸಿದ್ದೆವು. ಅಲ್ಲಿಂದ ಬಂದ ಮೇಲೆ ಆರು ತಿಂಗಳ ಬಳಿಕ ಮದುವೆಯೂ ಆದ. ಆದರೆ, ಮದುವೆ ಬಳಿಕ ಮತ್ತೆ ಕುಡಿಯಲಾರಂಭಿಸಿದ. ಅಂತಿಮವಾಗಿ ಅದು ಅವನ ಸಾವಿಗೆ ಕಾರಣವಾಯಿತು. ಎರಡು ವರ್ಷದ ಹಿಂದೆಯಷ್ಟೇ ಅ. 19ರಂದು ಮಗ ಆಕಾಶ್ ಸಾವನ್ನಪ್ಪಿದಾಗ ಅವನ ಮಗನಿಗೆ ಕೇವಲ ಎರಡು ವರ್ಷ. ನನ್ನ ಮಗನನ್ನು ನನ್ನಿಂದ ಉಳಿಸಿಕೊಳ್ಳಲಾಗಲಿಲ್ಲ. ಆತನ ಹೆಂಡತಿ ವಿಧವೆಯಾದಳು. ಹಾಗಾಗಿ, ಹೆತ್ತವರೇ ನೀವು ನಿಮ್ಮ ಹೆಣ್ಣುಮಕ್ಕಳ ಅಥವಾ ಸಹೋದರಿಯರನ್ನು ಇಂಥ ಸ್ಥಿತಿಯಿಂದ ರಕ್ಷಿಸಬೇಕು’ ಎಂದು ಸಚಿವರು ಸಲಹೆ ನೀಡಿದರು.