ಜೈಪುರ: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶಾನೆಲ್ಲೆ ಅವರು ಅರ್ಜುನ್ ಭಲ್ಲಾ ಅವರನ್ನು ವಿವಾಹವಾದರು.
ವಿವಾಹ ಸಮಾರಂಭವು 15 ನೇ ಶತಮಾನದ, ಪಾರಂಪರಿಕ ಹೋಟೆಲ್ ಖಿಮ್ಸರ್ ಕೋಟೆಯಲ್ಲಿ ನಡೆಯಿತು. ಕುಟುಂಬಕ್ಕೆ ನಿಕಟವಾಗಿರುವವರು ಮತ್ತು ಸ್ನೇಹಿತರಷ್ಟೇ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
‘ಹಳದಿ’ ಮತ್ತು ‘ಮೆಹೆಂದಿ’ ಕಾರ್ಯಕ್ರಮಗಳು ಬುಧವಾರವೇ ನಡೆದಿವೆ.
ಬಿಳಿ ಉಡುಪಿನಲ್ಲಿ ಆಗಮಿಸಿದ ವರನನ್ನು ಸ್ಮೃತಿ ಇರಾನಿ, ಅವರ ಪತಿ ಜುಬಿನ್ ಇರಾನಿ, ರಾಜಸ್ಥಾನದ ಮಾಜಿ ಸಚಿವ ಗಜೇಂದ್ರ ಸಿಂಗ್ ಖಿಮ್ಸರ್ ಮತ್ತು ವಧುವಿನ ಕುಟುಂಬದ ಸದಸ್ಯರು ಸ್ವಾಗತಿಸಿದರು.
ಎರಡೂ ಕಡೆಯಿಂದ ಸುಮಾರು 50 ಅತಿಥಿಗಳನ್ನು ಮಾತ್ರವೇ ಆಹ್ವಾನಿಸಲಾಗಿತ್ತು ಎಂದು ಗೊತ್ತಾಗಿದೆ.
ಹೋಟೆಲ್ ಸುತ್ತಲೂ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಅರ್ಜುನ್ ಭಲ್ಲಾ ಮತ್ತು ಶಾನೆಲ್ಲೆ ಕಾನೂನು ಪದವೀಧರರಾಗಿದ್ದು 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಖಿಮ್ಸರ್ ಹೋಟೆಲ್ ಮಾಜಿ ಸಚಿವ ಗಜೇಂದ್ರ ಸಿಂಗ್ ಅವರ ಒಡೆತನದ್ದಾಗಿದೆ.