ಭುವನೇಶ್ವರ (ಪಿಟಿಐ): ರಷ್ಯಾದ ಸಂಸದ ಪಾವೆಲ್ ಆ್ಯಂಥವ್ ಹಾಗೂ ವಕೀಲ ವಾಡ್ಲಿಮಿರ್ ಬಿದೆವೊ ಅವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ, ಒಡಿಶಾದ ಪೊಲೀಸ್ ಮಹಾನಿರ್ದೇಶಕ ಸುನಿಲ್ ಕುಮಾರ್ ಬನ್ಸಾಲ್ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಆ್ಯಂಥವ್ ಅವರು ಡಿ.24ರಂದು ರಾಯಗಢದ ಹೋಟೆಲ್ವೊಂದರ ಮೂರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ವಾಡ್ಲಿಮಿರ್ ಬಿದೆವೊ ಅವರು ಡಿ.22ರಂದು ಇದೇ ಹೋಟೆಲ್ನ ತಮ್ಮ ಕೋಣೆಯಲ್ಲಿ ಮೃತಪಟ್ಟಿದ್ದರು.
‘ಆ್ಯಂಥವ್ ಅವರು ತಮ್ಮ 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಬಿದೆವೊ ಸೇರಿದಂತೆ ತಮ್ಮ ಇಬ್ಬರು ಸ್ಮೇಹಿತರೊಂದಿಗೆ ರಾಯಗಢಕ್ಕೆ ಬಂದಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.