ಬಿಜ್ನೋರ್, ಉತ್ತರ ಪ್ರದೇಶ: ಸಿಎಎ ಮತ್ತು ಎನ್ಆರ್ಸಿ ವಿರುದ್ಧದ ಪ್ರತಿಭಟನೆ ವೇಳೆ ಉಂಟಾದ ಹಾನಿಗಾಗಿ ₹ 57 ಲಕ್ಷ ಪರಿಹಾರ ನೀಡುವಂತೆ ಇಲ್ಲಿನ ನಹ್ತೌರ್ನಲ್ಲಿ ಪೊಲೀಸರು 60 ಜನರಿಗೆ ನೋಟಿಸ್ ನೀಡಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
2019ರಡಿ.20 ರಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಸರ್ಕಾರಿ ಆಸ್ತಿ ಹಾನಿಗೊಳಿಸಿದೆ ಮತ್ತು ಪೊಲೀಸ್ ಜೀಪಿಗೆ ಬೆಂಕಿ ಹಚ್ಚಿದೆ ಎಂದು ನಹ್ತೌರ್ ಪೊಲೀಸ್ ಠಾಣೆಯ ಎಸ್ಎಚ್ಒ ಪಂಕಜ್ ತೋಮರ್ ಹೇಳಿದ್ದಾರೆ.
ಪೊಲೀಸರ ಮೇಲೂ ಗುಂಪು ಹಲ್ಲೆ ನಡೆಸಿತ್ತು. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ ಪರಿಣಾಮಅನಾಸ್ ಮತ್ತು ಸಲ್ಮಾನ್ ಎಂಬ ಇಬ್ಬರು ಯುವಕರು ಸಾವನ್ನಪ್ಪಿದ್ದರು ಎಂದೂ ತಿಳಿಸಿದ್ದಾರೆ.