ಅಜಂಗಡದ ಜಿಲ್ಲಾ ಚುನಾವಣಾಧಿಕಾರಿ ಅಮೃತ್ ತ್ರಿಪಾಟಿ, 'ಆ ವಾಹನವು ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ(ಬಿಡಿಒ) ಸೇರಿದ್ದಾಗಿದೆ. ವಶಪಡಿಸಿಕೊಂಡ ಮತಪತ್ರಗಳು ಬಳಕೆಯಾಗದ ಅಂಚೆ ಮತಪತ್ರಗಳಾಗಿದ್ದು, ಅವುಗಳನ್ನು ಮತಪತ್ರಗಳ ಜೊತೆಗೆ ಸಲ್ಲಿಸಬೇಕಾಗಿತ್ತು. ಆದರೆ ಬಿಡಿಒ ಅವುಗಳನ್ನು ಸಲ್ಲಿಸಿಲ್ಲ. ಇವುಗಳೀಗ ಕೇವಲ ಕಾಗದಗಳಷ್ಟೆ. ಆದರೆ, ಬಿಡಿಒ ಅವರ ನಿರ್ಲಕ್ಷ್ಯದಿಂದ ಅವರ ಅಮಾನತಿಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದ್ದು, ಈ ಬಗ್ಗೆ ಎಲ್ಲ ಅಭ್ಯರ್ಥಿಗಳಿಗೂ ಮಾಹಿತಿ ನೀಡಲಾಗಿದೆ' ಎಂದಿದ್ದಾರೆ.