ಮುಂದಿನ 6 ತಿಂಗಳಲ್ಲಿ ಗೋಶಾಲೆ ಪೂರ್ಣಗೊಳ್ಳಲಿದ್ದು, ಬಳಿಕ ಜಿಲ್ಲೆಯಲ್ಲಿ ಬಿಡಾಡಿ ದನಗಳು ಕಾಣಿಸುವುದಿಲ್ಲ. ಯೋಜನೆಗಾಗಿ ಚಾಲನಾ ಸಮಿತಿ ರಚಿಸಲಾಗುವುದು. ಗೋಶಾಲೆ ಆವರಣದಲ್ಲಿ ಪಶು ಅಂತ್ಯಸಂಸ್ಕಾರ ವ್ಯವಸ್ಥೆ ಕೂಡ ಇರಲಿದೆ. ನೀರಿನ ಟ್ಯಾಂಕ್, ಆಹಾರ ಸಂಗ್ರಹಣೆ ಸೌಲಭ್ಯಗಳನ್ನು ಕೂಡ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.