ಪ್ರತಿಭಟನಕಾರರು ಹೆದ್ದಾರಿ ಮೇಲೆ ಕುಳಿತು ಧರಣಿ ನಡೆಸಿದರು.ಅವರ ಜೊತೆ ಮಾತನಾಡಲು ಮೃತ ಯುವತಿ ಅಂಕಿತಾ ಬಂಡಾರಿ ಅವರ ತಂದೆ ವಿರೇಂದ್ರ ಸಿಂಗ್ ಬಂಡಾರಿ ಅವರನ್ನು ಪೊಲೀಸರು ಸ್ಥಳಕ್ಕೆ ಕರೆದುಕೊಂಡುಬಂದರು. ಆದರೂ ಪ್ರತಿಭಟನಕಾರರು ಸ್ಥಳದಿಂದ ಹೊರಡಲು ನಿರಾಕರಿಸಿದರು. ಅಂಕಿತಾ ಸಾವಿಗೆ ಕಾರಣರಾದವರನ್ನು ಕೂಡಲೇ ಗಲ್ಲಿಗೇರಿಸುವಂತೆ ಅವರು ಆಗ್ರಹಿಸಿದರು.