'ಯೋಗಿ ಸರ್ಕಾರವು ಐದು ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಇಂತಹ (ಅಪಹರಣ, ಸುಲಿಗೆ, ಗಲಭೆ, ದರೋಡೆ, ಮಾಫಿಯಾ) ಸನ್ನಿವೇಶಗಳಿಂದ ಹೊರ ತಂದಿದೆ. ಕಳೆದ ಸರ್ಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ಗಲಭೆಗಳನ್ನು ಉತ್ತರ ಪ್ರದೇಶದ ಪಶ್ಚಿಮ ಪ್ರದೇಶವು ಖಂಡಿತಾ ಮರೆಯುವುದಿಲ್ಲ.ಬಡವರು, ದೀನ ದಲಿತರು ಮತ್ತುಹಿಂದುಳಿದ ವರ್ಗದವರ ಮನೆ, ಜಮೀನು, ಅಂಗಡಿಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು5 ವರ್ಷಗಳ ಹಿಂದೆ ಸಾಮಾನ್ಯವಾಗಿತ್ತು. ಜನರು ಊರು ತೊರೆಯುತ್ತಿದ್ದ ಸುದ್ದಿಗಳು ನಿತ್ಯ ವರದಿಯಾಗುತ್ತಿತ್ತು' ಎಂದು ಉಲ್ಲೇಖಿಸಿದ್ದಾರೆ.