ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವ: 'ರೇಡಿಯೊ ಜಯಘೋಷ್'ಗೆ ಚಾಲನೆ ನೀಡಲಿದ್ದಾರೆ ಯೋಗಿ

Last Updated 8 ಆಗಸ್ಟ್ 2022, 5:18 IST
ಅಕ್ಷರ ಗಾತ್ರ

ಲಖನೌ:ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಭಾಗವಾಗಿ ಕಾಕೋರಿ ರೈಲು ಪ್ರಕರಣದ ಸ್ಮರಣಾರ್ಥ'ರೇಡಿಯೊ ಜಯಘೋಷ್' ಚಾನಲ್‌ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರುಮಂಗಳವಾರ ಚಾಲನೆ ನೀಡಲಿದ್ದಾರೆ.

ಶೌರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಉತ್ತರ ಪ್ರದೇಶದ ಜಾನಪದ ಕಲೆ, ಆಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜ್ಯ ಸಂಸ್ಕೃತಿ ಇಲಾಖೆಯು ಸಮುದಾಯ ರೇಡಿಯೊ ಚಾನಲ್‌ ಆರಂಭಿಸುತ್ತಿದೆ.

ರೇಡಿಯೊ ಜಯಘೋಷ್ 107.8MHz ನೆಟ್‌ವರ್ಕ್‌ನಲ್ಲಿ ಲಭ್ಯವಾಗಲಿದ್ದು, ಲಖನೌನಲ್ಲಿರುವ ಸಂಗೀತ ನಾಟಕ ಅಕಾಡೆಮಿ ಸ್ಟುಡಿಯೊದಿಂದ ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಕಾರ್ಯಕ್ರಮಗಳು ಪ್ರಸಾರವಾಗಲಿವೆ.

ರೆಡಿಯೊದ ಮೊಬೈಲ್‌ ಆ್ಯಪ್‌ ಹಾಗೂ ಸಾಮಾಜಿಕ ಮಾಧ್ಯಮ ಪುಟಗಳಲ್ಲಿಯೂ ಕಾರ್ಯಕ್ರಮಗಳನ್ನುಆಲಿಸಬಹುದಾಗಿದೆ.

ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಕೇಶ್‌ ಮೆಷ್‌ರಾಮ್‌, 'ಭಾರತದಲ್ಲಿ ಸಾಕಷ್ಟು ರೇಡಿಯೊ ಸ್ಟೇಷನ್‌ಗಳಿವೆ. ಆದರೆ, ನಾವು ಭಾರತದ ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದ ಕಲೆ ಮತ್ತು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ರೇಡಿಯೊ ಸ್ಟೇಷನ್‌ ತೆರೆಯುತ್ತಿದ್ದೇವೆ. ವೇಗದ ಜೀವನಶೈಲಿಯಿಂದಾಗಿ, ಜಾನಪದ ಕಥೆಗಳು ಮತ್ತು ನಂಬಿಕೆಗಳು ಯುವ ಜನರನ್ನು ತಲುಪುತ್ತಿಲ್ಲ.ಈ ಕ್ರಮವು (ರೇಡಿಯೊ ಜಯಘೋಷ್) ಯುವಕರು ಮತ್ತು ಮಕ್ಕಳನ್ನು ನಮ್ಮ ನೀತಿ, ಪದ್ಧತಿಗಳು ಮತ್ತು ಮೌಲ್ಯಗಳೊಂದಿಗೆ ಸಂಪರ್ಕಿಸುತ್ತದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಇದೇ ವೇಳೆ,ರಾಜ್ಯದ ಹಲವು ಜಿಲ್ಲೆಗಳು, ದೂರದ ಹಳ್ಳಿಗಳಲ್ಲಿರುವ ಎಲೆಮರೆಯ ಕಾಯಿಯಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡಲಿದ್ದೇವೆ. ನಾವು ಬ್ಯಾಕ್‌ಪ್ಯಾಕ್ ಸ್ಟುಡಿಯೊದ ಕಲ್ಪನೆಯನ್ನೂ ಹೊಂದಿದ್ದೇವೆ. ಅದರ ಮೂಲಕ,ರೆಕಾರ್ಡಿಂಗ್‌ಗೆ ಬೇಕಾಗುವ ಎಲ್ಲ ಉಪಕರಣಗಳನ್ನು ಪ್ರದೇಶಕ್ಕೇ ಕೊಂಡೊಯ್ದು,ಕಲಾವಿದರು ಇರುವ ಸ್ಥಳಗಳಲ್ಲಿಯೇ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡುವ ಚಿಂತನೆ ನಡೆಸಿದ್ದೇವೆ' ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಕಾಲಘಟ್ಟಗಳಲ್ಲಿ ಶೌರ್ಯ ಪ್ರದರ್ಶನ ತೋರಿದ ಯೋಧರ ಯಶೋಗಾಥೆಗಳನ್ನು ಒಳಗೊಂಡ 'ಪರಾಕ್ರಮ'ವೂ ಚಾನಲ್‌ನ ನಿತ್ಯದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇರಲಿದೆ.ಅದೇರೀತಿ ರಾಜ್ಯದ ಎಲ್ಲಾ 75 ಜಿಲ್ಲೆಗಳ ಜಾನಪದ ಕಥೆಗಳನ್ನು ಪ್ರಚಾರ ಮಾಡುವ 'ಶೌರ್ಯ ನಗರ' ಕಾರ್ಯಕ್ರಮ ಪ್ರಸಾರವಾಗಲಿದೆ. ವಾರಕ್ಕೊಮ್ಮೆಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮ ಇರಲಿದೆ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT