ಸುಲ್ತಾನ್ಪುರ (ಉತ್ತರ ಪ್ರದೇಶ):ಸುಲ್ತಾನ್ಪುರ ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ನೌಶಾದ್ ಖಾನ್ (42) ಅವರು ರಸ್ತೆ ಅಪಘಾತದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ನೌಶಾದ್ ಅವರ ಕಾರು ಹಾಗೂ ಟ್ರಕ್ ನಡುವೆ ಅಪಘಾತವಾಗಿದೆ.
ಈ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿದ್ದು,ಗೊಸಿಯಾಗಂಜ್ ಪ್ರದೇಶದಲ್ಲಿರುವ ತತಿಯಾನಗರ್ ಬಳಿ ಅಪಘಾತ ಸಂಭವಿಸಿದೆ.ನೌಶಾದ್ ಅವರು ತಮ್ಮ ಕಾರಿನಲ್ಲಿ ಸೋಮವಾರ ಸಂಜೆ ಮನೆಗೆ ಹಿಂದಿರುಗುತ್ತಿದ್ದಾಗ, ಟ್ರಕ್ ಡಿಕ್ಕಿ ಹೊಡೆದಿದೆಎಂದು ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಈ ವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ.
ಉತ್ತರ ಪ್ರದೇಶ ಕಾಂಗ್ರೆಸ್ ಘಟಕವು, ಟ್ವಿಟರ್ನಲ್ಲಿ ಸಂತಾಪ ಸೂಚಿಸಿದೆ.
सुल्तानपुर कांग्रेस के शहर अध्यक्ष नौशाद खान उर्फ खान बाबा के सड़क दुर्घटना में हुए मृत्यु की सूचना कांग्रेस परिवार के लिये बेहद दुःखद है।